ಗೃಹಿಮ್ಸಾಂಶ-೧
ಅದು ಕ್ರಿ.ಪೂ. ೧೩,೬೪೮ ನೇ ಇಸವಿ.
ಅಂದರೆ ಇಂದಿಗೆ ಸುಮಾರು ೧೫೬೭೦ ವರ್ಷಗಳ ಹಿಂದೆ. ನಮಗೆ ಗೊತ್ತಿರುವ ನಾಗರಿಕತೆಗಳ ಹುಟ್ಟಿಗೂ ಬಹಳ ಹಿಂದಿನ ಮಾತು.
ಬಹುಷಃ ಇದು ಎಷ್ಟು ಹಿಂದಿನ ಕಾಲ ಎಂಬ ಅರಿವು ಇಲ್ಲಿ ಬರದೆ ಇರಬಹುದು. ಇಂದಿಗೆ ಕ್ರಿಸ್ತ ಹುಟ್ಟಿ ಸುಮಾರು ೨೦೦೦ವರ್ಷಗಳು ಉರುಳಿವೆ ಇದರ ೬ ಪಟ್ಟು ಹಿಂದಿನ ವಾಸ್ತವ್ಯ. ಈ ೨ ಸಹಸ್ರ ವರುಷಗಳ ಮಾಹಿತಿ ನಮಗಿರುವುದು ಅಲ್ಪ. ಅದು ಕ್ರಿಸ್ತನ ಹುಟ್ಟು ಇರಬಹುದು, ರೋಮನ್ನರ ಯುದ್ಧಗಳು ಇರಬಹುದು, ಬುದ್ಧನ ಮಹಾವೀರರ ಹುಟ್ಟು ಆಗಿರಬಹುದು, ಕನ್ನಡ ಸಾಹಿತ್ಯದ ಉಗಮವಾಗಿರಬಹುದು, ಪಂಪ ರನ್ನ ಅವರ ಕಾಲ ಆಗಿರಬಹುದು, ಶಂಕರಾಚಾರ್ಯರು ಸನಾತನ ಧರ್ಮದ ಪ್ರಚಾರ ಮಾಡಿರಬಹುದಾದ ಅರಿವಿರಬಹುದು, ಕನ್ನಡ ರಾಜರ ಆಳ್ವಿಕೆಯಗಿರಬಹುದು, ವಚನ ಸಾಹಿತ್ಯದ ಉಗಮವಿರಬಹುದು, ಮೊಘಲರ ಆಳ್ವಿಕೆ, ನಂತರ ಬ್ರಿಟೀಷರ ವಸಾಹತುಶಾಹಿಯ ಕಾಲವಾಗಿರಬಹುದು, ನ್ಯೂಟನ್ನಿನ ಸಿದ್ಧಾಂತಗಳು, ವಿದ್ಯುತ್ತಿನ ಆವಿಷ್ಕಾರ, ಕೈಗಾರಿಕಾ ಕ್ರಾಂತಿ, ಸ್ವಾತಂತ್ರ್ಯ ಸಂಗ್ರಾಮ, ಗಾಂಧಿಯವರ ತತ್ವಗಳು, ಸ್ವಾತಂತ್ರ್ಯ, ಸ್ವಾತಂತ್ರ್ಯ ನಂತರದ ದಿನಗಳು, ಆಧುನಿಕ ಜಗತ್ತು, ಕಂಪ್ಯೂಟರ್ ಯುಗ ಮತ್ತು ಈಗಿನ ಸ್ಮಾರ್ಟ್ಫೋನ್ ಜೀವನ. ಇದು ಕೇವಲ ೨ ಸಾವಿರ ವರ್ಷಗಳ ಒಂದು ತುಣುಕು ಅಷ್ಟೆ. ಇದರ ೬ ಪಟ್ಟು ಕಾಲದ ಹಿಂದೆ ಎಂದರೆ ಅದು ಊಹೆಗೂ ನಿಲುಕದ್ದು. ಆ ಕಾಲಾಂತರದಲ್ಲಿ ಆದ ಬದಲಾವಣೆ, ಅದು ಕಲ್ಪನಾತೀತ. ಆದರೂ ಹೀಗೊಂದು ಊಹೆ ಮಾಡುತ್ತಿರುದು ಕೇವಲ ನನ್ನ ಮಿತ ಮತಿಯ ಅನುಮತಿಯಿಂದ ಮಾತ್ರ.
ಈಗಿನ ಮಲೆನಾಡು ಎಂದು ಕರೆಯಲ್ಪಡುವ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಎಲ್ಲೋ ಒಂದು ಕಾಡು. ಹಾ! ಕಾಡು ಎಂದು ಪ್ರೆತ್ಯೇಕಿಸಲ್ಪಡುವ ಪದದ ಪ್ರಯೋಗ ಉಚಿತವಲ್ಲವೇನೋ, ಯಾಕಂದರೆ ಆಗಿದ್ದದ್ದು ಕೇವಲ ಕಾಡು ಮಾತ್ರ. ಈಗಿನ ನಾಗರೀಕತೆಯ ಜಾತ್ರೆಯ ನಡುವೆ, ಊರುಗಳೆಂಬ ಹಲವು ವೈವಿದ್ಯಮಯ ಅಂಗಡಿಗಳ ಮಧ್ಯೆ, ಕಾಡು ಎಂಬುದು ಬಹುಷಃ, ಅವಶೇಷಗಳಡಿಯಲ್ಲಿ ಸಿಗುವ ಶೇಷಗಳಾಗಿವೆ. ಇರಲಿ. ಆಗ ಅಲ್ಲಿ ಇದ್ದದ್ದು ಕಾಡು ಮಾತ್ರ. ಕಾಡಿನ ನಿಜವಾದ ಗಾಢತೆ ಗೊತ್ತಾಗುವುದು ಈಗಿನ ಕಾಡುಗಳ ನಡುವೆ ದಾರಿ ಇಲ್ಲದೆ ಹೋಗಿ ತಲುಪಿ ನಡುವೆ ಯಾವ ಸಖ್ಯವೂ ಇಲ್ಲದೆ ನಿಂತಾಗ.
ಹೌದು, ನಾವೆಲ್ಲ ಇಂದು ನೆಮ್ಮದಿಯಿಂದ ಬದುಕುವುದು ನಮಗೆ ಯಾವ ಭಯವು ಇಲ್ಲದೆ ಇರುವುದರಿಂದ. ನಾವು ಎಲ್ಲೇ ಹೋದರು, ನಮಗೊಂದು ರಸ್ತೆ ಸಿಗುತ್ತೆ. ಅದು ಮುಂದೆ ಇರಬಹುದು, ಹಿಂದೆ ಇರಬಹುದು. ಆದರೆ, ಅದೊಂದು ಸ್ಥಳಕ್ಕೆ ಕೊಂಡೊಯ್ಯಬಲ್ಲದು ಎಂಬ ನಮ್ಮ ಚಿರ ನಂಬಿಕೆ, ನಮ್ಮನ್ನು ಗುರಿಯ ಹುಡುಕಾಟದಿಂದ ನಿರಾಳವಾಗಿಸುತ್ತೆ. ಯಾವುದರ ಸಹಾಯವೂ ಇಲ್ಲದೆ ಗಾಳಿಯಲ್ಲಿ ತೇಲುತ್ತಿದ್ದರೆ, ನಮ್ಮ ಗುರಿ ನೆಲಕ್ಕೆ. ಹಾಗೆಯೆ, ನೀರಮೆಲಿದ್ದರೆ ನಮ್ಮ ಗುರಿ ನೀರಿನಾಳಕ್ಕೆ. ಈ ಎರಡರಲ್ಲೂ ಗುರುತ್ವದ ಸಾಂಗತ್ಯ ನಮ್ಮನ್ನು ಗುರಿಯೆಡೆಗೆ ತಲುಪಿಸಬಲ್ಲದು. ಆದರೆ, ದಟ್ಟ ಕಾನನದ ನಡುವೆ, ಯಾವ ದಾರಿಯು ಇಲ್ಲದೆ, ಯಾವ ಊರೂ ಇಲ್ಲದ, ವಿದ್ಯುತ್ಚಕ್ತಿಯ ಗಂಧ ಗಾಳಿಯೂ ಅರಿಯದ, ಸೂರ್ಯನೊಂದೇ ಬೆಳಕಾಗಿರುವ ಕಾಲದಲ್ಲಿ, ಅಲ್ಲಿ, ಅಲ್ಲೊಂದು ನಮಗರಿಯದ ಕತೆ ಇದು. ನಾಗರಿಕತೆ ಎನ್ನಬಹುದೇನೊ.
ಅಂದರೆ ಇಂದಿಗೆ ಸುಮಾರು ೧೫೬೭೦ ವರ್ಷಗಳ ಹಿಂದೆ. ನಮಗೆ ಗೊತ್ತಿರುವ ನಾಗರಿಕತೆಗಳ ಹುಟ್ಟಿಗೂ ಬಹಳ ಹಿಂದಿನ ಮಾತು.
ಬಹುಷಃ ಇದು ಎಷ್ಟು ಹಿಂದಿನ ಕಾಲ ಎಂಬ ಅರಿವು ಇಲ್ಲಿ ಬರದೆ ಇರಬಹುದು. ಇಂದಿಗೆ ಕ್ರಿಸ್ತ ಹುಟ್ಟಿ ಸುಮಾರು ೨೦೦೦ವರ್ಷಗಳು ಉರುಳಿವೆ ಇದರ ೬ ಪಟ್ಟು ಹಿಂದಿನ ವಾಸ್ತವ್ಯ. ಈ ೨ ಸಹಸ್ರ ವರುಷಗಳ ಮಾಹಿತಿ ನಮಗಿರುವುದು ಅಲ್ಪ. ಅದು ಕ್ರಿಸ್ತನ ಹುಟ್ಟು ಇರಬಹುದು, ರೋಮನ್ನರ ಯುದ್ಧಗಳು ಇರಬಹುದು, ಬುದ್ಧನ ಮಹಾವೀರರ ಹುಟ್ಟು ಆಗಿರಬಹುದು, ಕನ್ನಡ ಸಾಹಿತ್ಯದ ಉಗಮವಾಗಿರಬಹುದು, ಪಂಪ ರನ್ನ ಅವರ ಕಾಲ ಆಗಿರಬಹುದು, ಶಂಕರಾಚಾರ್ಯರು ಸನಾತನ ಧರ್ಮದ ಪ್ರಚಾರ ಮಾಡಿರಬಹುದಾದ ಅರಿವಿರಬಹುದು, ಕನ್ನಡ ರಾಜರ ಆಳ್ವಿಕೆಯಗಿರಬಹುದು, ವಚನ ಸಾಹಿತ್ಯದ ಉಗಮವಿರಬಹುದು, ಮೊಘಲರ ಆಳ್ವಿಕೆ, ನಂತರ ಬ್ರಿಟೀಷರ ವಸಾಹತುಶಾಹಿಯ ಕಾಲವಾಗಿರಬಹುದು, ನ್ಯೂಟನ್ನಿನ ಸಿದ್ಧಾಂತಗಳು, ವಿದ್ಯುತ್ತಿನ ಆವಿಷ್ಕಾರ, ಕೈಗಾರಿಕಾ ಕ್ರಾಂತಿ, ಸ್ವಾತಂತ್ರ್ಯ ಸಂಗ್ರಾಮ, ಗಾಂಧಿಯವರ ತತ್ವಗಳು, ಸ್ವಾತಂತ್ರ್ಯ, ಸ್ವಾತಂತ್ರ್ಯ ನಂತರದ ದಿನಗಳು, ಆಧುನಿಕ ಜಗತ್ತು, ಕಂಪ್ಯೂಟರ್ ಯುಗ ಮತ್ತು ಈಗಿನ ಸ್ಮಾರ್ಟ್ಫೋನ್ ಜೀವನ. ಇದು ಕೇವಲ ೨ ಸಾವಿರ ವರ್ಷಗಳ ಒಂದು ತುಣುಕು ಅಷ್ಟೆ. ಇದರ ೬ ಪಟ್ಟು ಕಾಲದ ಹಿಂದೆ ಎಂದರೆ ಅದು ಊಹೆಗೂ ನಿಲುಕದ್ದು. ಆ ಕಾಲಾಂತರದಲ್ಲಿ ಆದ ಬದಲಾವಣೆ, ಅದು ಕಲ್ಪನಾತೀತ. ಆದರೂ ಹೀಗೊಂದು ಊಹೆ ಮಾಡುತ್ತಿರುದು ಕೇವಲ ನನ್ನ ಮಿತ ಮತಿಯ ಅನುಮತಿಯಿಂದ ಮಾತ್ರ.
ಈಗಿನ ಮಲೆನಾಡು ಎಂದು ಕರೆಯಲ್ಪಡುವ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಎಲ್ಲೋ ಒಂದು ಕಾಡು. ಹಾ! ಕಾಡು ಎಂದು ಪ್ರೆತ್ಯೇಕಿಸಲ್ಪಡುವ ಪದದ ಪ್ರಯೋಗ ಉಚಿತವಲ್ಲವೇನೋ, ಯಾಕಂದರೆ ಆಗಿದ್ದದ್ದು ಕೇವಲ ಕಾಡು ಮಾತ್ರ. ಈಗಿನ ನಾಗರೀಕತೆಯ ಜಾತ್ರೆಯ ನಡುವೆ, ಊರುಗಳೆಂಬ ಹಲವು ವೈವಿದ್ಯಮಯ ಅಂಗಡಿಗಳ ಮಧ್ಯೆ, ಕಾಡು ಎಂಬುದು ಬಹುಷಃ, ಅವಶೇಷಗಳಡಿಯಲ್ಲಿ ಸಿಗುವ ಶೇಷಗಳಾಗಿವೆ. ಇರಲಿ. ಆಗ ಅಲ್ಲಿ ಇದ್ದದ್ದು ಕಾಡು ಮಾತ್ರ. ಕಾಡಿನ ನಿಜವಾದ ಗಾಢತೆ ಗೊತ್ತಾಗುವುದು ಈಗಿನ ಕಾಡುಗಳ ನಡುವೆ ದಾರಿ ಇಲ್ಲದೆ ಹೋಗಿ ತಲುಪಿ ನಡುವೆ ಯಾವ ಸಖ್ಯವೂ ಇಲ್ಲದೆ ನಿಂತಾಗ.
ಹೌದು, ನಾವೆಲ್ಲ ಇಂದು ನೆಮ್ಮದಿಯಿಂದ ಬದುಕುವುದು ನಮಗೆ ಯಾವ ಭಯವು ಇಲ್ಲದೆ ಇರುವುದರಿಂದ. ನಾವು ಎಲ್ಲೇ ಹೋದರು, ನಮಗೊಂದು ರಸ್ತೆ ಸಿಗುತ್ತೆ. ಅದು ಮುಂದೆ ಇರಬಹುದು, ಹಿಂದೆ ಇರಬಹುದು. ಆದರೆ, ಅದೊಂದು ಸ್ಥಳಕ್ಕೆ ಕೊಂಡೊಯ್ಯಬಲ್ಲದು ಎಂಬ ನಮ್ಮ ಚಿರ ನಂಬಿಕೆ, ನಮ್ಮನ್ನು ಗುರಿಯ ಹುಡುಕಾಟದಿಂದ ನಿರಾಳವಾಗಿಸುತ್ತೆ. ಯಾವುದರ ಸಹಾಯವೂ ಇಲ್ಲದೆ ಗಾಳಿಯಲ್ಲಿ ತೇಲುತ್ತಿದ್ದರೆ, ನಮ್ಮ ಗುರಿ ನೆಲಕ್ಕೆ. ಹಾಗೆಯೆ, ನೀರಮೆಲಿದ್ದರೆ ನಮ್ಮ ಗುರಿ ನೀರಿನಾಳಕ್ಕೆ. ಈ ಎರಡರಲ್ಲೂ ಗುರುತ್ವದ ಸಾಂಗತ್ಯ ನಮ್ಮನ್ನು ಗುರಿಯೆಡೆಗೆ ತಲುಪಿಸಬಲ್ಲದು. ಆದರೆ, ದಟ್ಟ ಕಾನನದ ನಡುವೆ, ಯಾವ ದಾರಿಯು ಇಲ್ಲದೆ, ಯಾವ ಊರೂ ಇಲ್ಲದ, ವಿದ್ಯುತ್ಚಕ್ತಿಯ ಗಂಧ ಗಾಳಿಯೂ ಅರಿಯದ, ಸೂರ್ಯನೊಂದೇ ಬೆಳಕಾಗಿರುವ ಕಾಲದಲ್ಲಿ, ಅಲ್ಲಿ, ಅಲ್ಲೊಂದು ನಮಗರಿಯದ ಕತೆ ಇದು. ನಾಗರಿಕತೆ ಎನ್ನಬಹುದೇನೊ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ